ಶಾಸಕರು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಸ್ಥಳೀಯರ ಆಕ್ರೋಶ
ಬೆಳಗಾವಿ: ಮಚ್ಛೆ ಹಾಗೂ ಪಿರಣವಾಡಿ ಪಟ್ಟಣ ಪಂಚಾಯತಿಗಳನ್ನು ಕೆಳ ದರ್ಜೆಗೆ ಇಳಿಸಿ ಗ್ರಾಮ ಪಂಚಾಯತಿಗಳನ್ನಾಗಿ ಪರಿವರ್ತಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೆ ಗ್ರಾಮ ಪಂಚಾಯತಿಗಳನ್ನು ಜನಸಂಖ್ಯೆ ಆಧಾರದ ಮೇಲೆ ಅಭಿವೃದ್ದಿಗಾಗಿ ಮೇಲ್ದರ್ಜೆಗೆ ಏರಿಸಿ ಮಚ್ಛೆ ಹಾಗೂ ಪಿರಣವಾಡಿ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಸ್ಥಳೀಯ ಶಾಸಕರ ಒತ್ತಾಯದ ಮೇರೆಗೆ ಸರಕಾರ ಆದೇಶ ಹೊರಡಿಸಿತ್ತು ಆದರೆ ಮತ್ತೆ ಶಾಸಕರು ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಈ ಪ್ರಸ್ತಾವಣೆಗೆ ಅನುಮೋದನೆ ನೀಡಿದ್ದಾರೆ.
ನಮಗೆ ಪಟ್ಟಣ ಪಂಚಾಯತಿಗಳೇ ಬೇಕು : ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಗ್ರಾಮಸ್ಥರು