ಬೆಳಗಾವಿ

ಮಚ್ಛೆ ಪಿರಣವಾಡಿ ಮತ್ತೆ ಗ್ರಾಮ ಪಂಚಾಯತಿ..?

ಶಾಸಕರು  ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಸ್ಥಳೀಯರ ಆಕ್ರೋಶ 

ಬೆಳಗಾವಿ: ಮಚ್ಛೆ ಹಾಗೂ ಪಿರಣವಾಡಿ ಪಟ್ಟಣ ಪಂಚಾಯತಿಗಳನ್ನು  ಕೆಳ ದರ್ಜೆಗೆ ಇಳಿಸಿ ಗ್ರಾಮ ಪಂಚಾಯತಿಗಳನ್ನಾಗಿ ಪರಿವರ್ತಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಎರಡು  ವರ್ಷಗಳ ಹಿಂದೆ ಇದೆ  ಗ್ರಾಮ ಪಂಚಾಯತಿಗಳನ್ನು ಜನಸಂಖ್ಯೆ  ಆಧಾರದ ಮೇಲೆ ಅಭಿವೃದ್ದಿಗಾಗಿ ಮೇಲ್ದರ್ಜೆಗೆ ಏರಿಸಿ ಮಚ್ಛೆ ಹಾಗೂ ಪಿರಣವಾಡಿ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ  ಸ್ಥಳೀಯ ಶಾಸಕರ ಒತ್ತಾಯದ ಮೇರೆಗೆ ಸರಕಾರ ಆದೇಶ ಹೊರಡಿಸಿತ್ತು  ಆದರೆ ಮತ್ತೆ ಶಾಸಕರು ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಈ ಪ್ರಸ್ತಾವಣೆಗೆ ಅನುಮೋದನೆ ನೀಡಿದ್ದಾರೆ.

ನಮಗೆ ಪಟ್ಟಣ ಪಂಚಾಯತಿಗಳೇ ಬೇಕು : ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಗ್ರಾಮಸ್ಥರು

 ಮಚ್ಛೆ ಹಾಗೂ ಪಿರಣವಾಡಿ ಪಟ್ಟಣ ಪಂಚಾಯತಿಗಳಿಂದ ಜನರಿಗೆ ತೆರಿಗೆ ಹೊರೆ ಯಾಗಿದೆ ಹಾಗೂ ನರೇಗಾ, ಉದ್ಯೋಗ ಖಾತ್ರಿ ಯೋಜನೆಗಳ ಸರಿಯಾದ ಉಪಯೋಗ ಸಿಗುತ್ತಿಲ್ಲವೆಂದು ಗ್ರಾಮಸ್ಥರು  ಮತ್ತೆ  ಶಾಸಕರ ಮೇಲೆ ಒತ್ತಡ ಹೇರಿ ಎರಡು ಗ್ರಾಮ ಪಂಚಾಯತಿಯನ್ನಾಗಿ ಪರಿವರ್ತಿಕೊಂಡಿದ್ದಾರೆ.
ಈ ಬಗ್ಗೆ ವ್ಯಕ್ತಪಡಿಸಿದ ಗ್ರಾಮಸ್ಥರು ಇದೊಂದು ಚದುರಂಗದಾಟ ಇದರಲ್ಲಿ  ರಾಜಕೀಯ ಹಿತಾಸಕ್ತಿ ಇದೆ ಎರಡು ವರ್ಷದ ಮೊದಲು  ಸಹಿತ ಶಾಸಕ ಅಭಯ ಪಾಟೀಲ ತುರಾತುರಿಯಲ್ಲಿ ಗ್ರಾಮ್ ಪಂಚಾಯತಿಗಳನ್ನು   ಪಟ್ಟಣ ಪಂಚಾಯತಿಗಳನ್ನಾಗಿ ಪರಿವರ್ತಿಸಿಕೊಂಡು’ ಬಂದಿದ್ದರು ಅದಕ್ಕೆ ಅಭಿವೃದ್ಧಿ ಹಿತ ದೃಷ್ಟಿಯಿಂದ ಸ್ವಾಗತ ಮಾಡಿದ್ದೆವು. ಆದರೆ ಚುನಾವಣೆ ಮುಂಚೂಣಿಯಲ್ಲಿದ್ದಾಗ  ಇತರಹ ರಾಜಕೀಯ ಮಾಡಿ ಜನರ ಜೀವನದ ಜೊತೆ ಚಲ್ಲಾಟವಾಡುವುದು ಸರಿಯಿಲ್ಲ. ಮೊದಲೇ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣ ಪಂಚಾಯತಿಗಳನ್ನು ಮಾಡಬೇಕಾಗಿತ್ತು,
ಈ ಕೂಡಲೇ  ಆದೇಶ ಹಿಂಪಡೆಯದಿದ್ದರೆ ನಾವೆಲ್ಲೇ  ಬೀದಿಗಿಳಿದು ಹೋರಾಟ ಮಾಡುವದಾಗಿ ಗ್ರಾಮಸ್ಥರು  ಎಚ್ಚರಿಕೆ ನೀಡಿದ್ದಾರೆ.
TV24 News Desk
the authorTV24 News Desk

Leave a Reply