ಬೆಳಗಾವಿ

ಬಹುದಿನಗಳ ಬೇಡಿಕೆ ಈಡೇರಿಸಿದ ರಮೇಶ ಕತ್ತಿ

ಹುಕ್ಕೇರಿಯಲ್ಲಿ  ಸಂವಿಧಾನ ಶಿಲ್ಪಿ ಡಾ:ಬಾಬಾಸಾಹೇಬ ಅಂಬೇಡ್ಕರ ಅವರ ಮೂರ್ತಿ ಪ್ರತಿಷ್ಠಾಪನೆ 
ಹುಕ್ಕೇರಿ: ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ. ಬಹುದಿನಗಳ ಬೇಡಿಕೆ ಈಡೇರಿಸಿದ ರಮೇಶ ಕತ್ತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ   ಹ್ರದಯಬಾಗದ ಹಳೆ ತಹಶಿಲ್ದಾರ ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ:ಬಾಬಾಸಾಹೇಬ ಅಂಬೇಡ್ಕರ ಅವರ ಮೂರ್ತಿ ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಮಾಜಿ ಎಮ್ ಪಿ ಹಾಗೂ ಬೆಳಗಾವಿ ಜಿಲ್ಲೆ  DCC ಬ್ಯಾಂಕ್ ಅಧ್ಯಕ್ಷರು ರಮೇಶ್ ಕತ್ತಿ ಹಾಗೂ ಬಸವರಾಜ್ ಮಟಗಾರ ಸುರೇಶ ತಳವಾರ ಉದಯ ಹುಕ್ಕೇರಿ ಅಶೊಕ ಅಂಕಲಿ ಹಾಗೂ ದಲಿತ ಸಮಾಜದ ಮುಖಂಡರು ಯುವಕರು  ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತಮನಾಡಿದ ರಮೇಶ ಕತ್ತಿ ಹುಕ್ಕೇರಿಯಲ್ಲಿ ಅಂಬೇಡ್ಕರ್ ರವರ ಮೂರ್ತಿ ಪ್ರತಿಷ್ಟಾಪನೆ ಕೆಲಸ ಬಹಳ ದಿನಗಳ ಬೇಡಿಕೆಯಾಗಿತ್ತು ಆದರೆ ಅದರ ಕಾಲ ಈಗ ಕೂಡಿ ಬಂತು ರಾಜೇಶ್ವರಿ ಕತ್ತಿ ಹಾಗೂ ವಿಶ್ವನಾಥ ಕತ್ತಿ ಪೌಂಡೇಶನ್ ಸಹಯೊಗದಲ್ಲಿ ಈ ಮೂರ್ತಿ ಪ್ರತಿಸ್ಥಾಪನೆ ಮಾಡಲು ಮುಂದಾಗಿದ್ದೆವೆಂದು ಮಾತನಾಡಿದರು. ಔರಂಗಾಬಾದ ಪಟ್ಟಣದಿಂದ ಮೂರ್ತಿಯನ್ನ ತಂದು ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಹಳೇ ತಹಶಿಲ್ದಾರ ಕಛೆರಿಯ ಆವರಣದಲ್ಲಿ ಅನಾವರಣ ಮಾಡಿದರು.ಇನ್ನೂ ಮೂರ್ತಿಯ ಅದ್ದೂರಿ ವಿಜಯೊತ್ಸವ ಚುನಾವಣೆ ಮುಗಿದ ಮೇಲೆ ಯೋದರನ್ನು ಹಾಗೂ ಸ್ವಾಮಿಜಿಗಳನ್ನು ಕರೆತಂದು ಅವರಿಂದ ಪುಷ್ಪಾರಣೆ ಮಾಡಿತ್ತೆವೆಂದು ಮಾದ್ಯಮದ ಮುಂದೆ ರಮೇಶ್ ಕತ್ತಿ ಹೇಳಿದರು.
TV24 News Desk
the authorTV24 News Desk

Leave a Reply