ಬೆಳಗಾವಿ

ರಾಮದುರ್ಗ ಪಟ್ಟಣದಲ್ಲಿ 74ನೇ ಗಣರಾಜ್ಯೋತ್ಸವ ದಿನಾಚರಣೆ

ರಾಮದುರ್ಗ:- ತಾಲೂಕು ಆಡಳಿತ ರಾಮದುರ್ಗ ವತಿಯಿಂದ 74ನೇ ಗಣರಾಜ್ಯೋತ್ಸವ ದಿನಾಚರಣೆ ತಾಲೂಕು ದಂಡಾಧಿಕಾರಿ ಮಲ್ಲಿಕಾರ್ಜುನ ಹೆಗ್ಗನ್ನವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ವೇಳೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪತ್ರಕರ್ತರು ಹಾಗೂ ಸಮಸ್ತ ನಾಗರಿಕರು ಬೆಳಿಗ್ಗೆ   ಧ್ವಜಾರೋಹಣವನ್ನು ಶಾಸಕರಾದ ಮಾಹದೇವಪ್ಪ ಯಾದವಾಡರವರು ನೆರವೇರಿಸಿದರು. ಈ ಸಂದರ್ಭದಲ್ಲಿ ರಘುನಾಥ್ ರೇಣಕೆ,  ನಾಗರಾಜ್ ಕಟ್ಟಿಮಣಿ , ಆರ್ ಆರ್ ಪಟ್ಟಣಶೆಟ್ಟಿ  (ಸಿ.ಪಿ.ಐ)ಭಾಗವಹಿಸಿದ್ದರು. ಕೊನೆ ಹಂತದಲ್ಲಿ ಶಾಸಕರು ಗಣರಾಜ್ಯೋತ್ಸವ ದ ಮಾತನಾಡಿ ಗಣರಾಜ್ಯೋತ್ಸವ ಎಂದರೆ ನಮ್ಮ ಭಾರತ ದೇಶದ ಕಾನೂನು ವ್ಯವಸ್ಥೆ ಹಾಗೂ ಸುವ್ಯವಸ್ಥೆ ಹಾಗು ಹಕ್ಕುಗಳನ್ನು ಪಡೆಯುವ ವ್ಯವಸ್ಥೆಯಲ್ಲಿ ಬರುವಂತಹ ಒಂದು ಪ್ರಮುಖವಾದ ವಿಷಯ ವಸ್ತುವಾಗಿದೆ ಎಂದು ಹೇಳಿದರು 
ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ಯಾದವಾಡ 

ರಾಮದುರ್ಗ:- ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ವತಿಯಿಂದ  ರಾಮದುರ್ಗ ಶಾಸಕರಾದ ಮಹಾದೇವಪ್ಪ ಯಾದವಾಡ 74ನೇ ಗಣರಾಜ್ಯೋತ್ಸವದಂದು ಆಯ್ಕೆ ಮಾಡಿದ ತ್ರಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ  ವಿತರಿಸಿದರು. ಈ ಸಂದರ್ಭದಲ್ಲಿ  ತಹಸೀಲ್ದಾರ  ಮಲ್ಲಿಕಾರ್ಜುನ್ ಹೆಗ್ಗನ್ನವರ ಹಾಗೂ ಸಿಡಿಪಿಒ  ಶ್ರೀಮತಿ ಮಂಜುಳಾ ಉಪಸ್ಥಿತರಿದ್ದರು.

ರಾಮದುರ್ಗ:  ಪಟ್ಟಣದ ಗೌಶಿಯಾ ದೌರುಲ್ಲ ಉಲಂ ಮದರಸ ವತಿಯಿಂದ ಹಮ್ಮಿಕೊಳ್ಳಲಾದ 74ನೇ ಗಣರಾಜ್ಯೋತ್ಸವನ್ನು ತುಂಬಾ ವಿಶೇಷವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ  ಉಪಸ್ಥಿತರಿದ್ದ ಗೌಸಾಬ ಕಾಜಿ ಅಧ್ಯಕ್ಷರು, ಮುಕ್ತಿ ಹಾಜಿ ಮೌಲಾನ, ಮುನ್ನಾ ಮಕಾಂದರ ಸದಸ್ಯರು , ಏನಾಯ್ತು ಕಲಾದಗಿ, ಶಾನೂರ್ ಯಾದವಾಡ, ಅಬ್ಬಾಸ್ ಕಲಬುರ್ಗಿ ಹಾಗೂ ಮಸೀದಿಗೆ ಸಂಬಂಧಪಟ್ಟ ಸದಸ್ಯರು ವಿದ್ಯಾರ್ಥಿಗಳು ಪಾಲ್ಗೊಂಡು ಗಣರಾಜ್ಯೋತ್ಸವನ್ನು ಆಚರಣೆ ಆಚರಿಸಿದರು. ಇದೇ ವೇಳೆಯಲ್ಲಿ ಮಾತನಾಡಿದ  ಗೌಸಸಾಬ ಖಾಜಿ( ಅಧ್ಯಕ್ಷರು) ಅವರು ಗಣರಾಜ್ಯೋತ್ಸವದ ಅಂಗವಾಗಿ  ದೇಶದ ಆಗು ಹೋಗುಗಳ ಬಗ್ಗೆ ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಕಾನೂನು ವ್ಯವಸ್ಥೆ ಅರಿವು ಮೂಡಿಸಿದರು.
TV24 News Desk
the authorTV24 News Desk

Leave a Reply