ಬೆಳಗಾವಿ: ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಿಗೆ ಅಲ್ಲಿನ ಪುಂಡರು ಮಸಿ ಬಳಿದು ಇಂದು ಪುಂಡಾಟಿಕೆ ನಡೆಸಿದ್ದರು . ಈಗ ಮಹಾರಾಷ್ಟ್ರ ಬಸ್ಗಳಿಗೂ ಕರ್ನಾಟಕದಲ್ಲಿ ಕಪ್ಪು ಮಸಿ ಬಳಿಯ ಬಹುದು ಎಂದು ಏಕಾಏಕಿ 300ಕ್ಕೂ ಅಧಿಕ ಹೆಚ್ಚು ಬಸ್ಗಳ ಸಂಚಾರವನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಥಗಿತಗೊಳಿಸಿದೆ. ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ಎಮ್ಎಸ್ ಆರ್ ಟಿ ಸಿ ಬಸ್ಗಳು ಸಂಚರಿಸುತ್ತಿದ್ದವು. ಆದರೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಎಂದಿನಂತೆ ಬಸ್ಗಳು ತೆರಳುತ್ತಿವೆ.ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ ಬಸ್ಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
tv24plus.in > Blog > ಜಿಲ್ಲೆ > ಬೆಳಗಾವಿ > ಕನ್ನಡಿಗರಿಗೆ ಭಯಪಟ್ಟು ಮಹಾ ಬಸ್ ಬಂದ್