ಬೆಳಗಾವಿ: ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದಿಂದ ಬೆಳಗಾವಿ ವರೆಗೆ ರಸ್ತೆಯನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 1.40 ಕೋಟಿ ರೂ,ಗಳನ್ನು ಮಂಜೂರು ಮಾಡಿಸಲಾಗಿದ್ದು, ಇವತ್ತು ಕಲ್ಲೆಹೋಳ ಕಾರ್ನರ್ ವಡ್ರಾಂಗಿ ಎನ್ನುವ ಪ್ರದೇಶದಲ್ಲಿ ಭೂಮಿ ಪೂಜೆಯನ್ನು ಕೈಗೊಂಡು ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮನೋಹರ್ ಬೆಳಗಾಂವ್ಕರ್, ಮಹೇಶ ಪಾಟೀಲ, ನಾಮದೇವ ಮೋರೆ, ಮಲ್ಲಪ್ಪ ಪಾಟೀಲ, ಶಿವಾಜಿ ಪಾಟೀಲ, ಬಾಗಣ್ಣ ನರೋಟಿ, ಪರುಶರಾಮ ಬಾಸ್ಕಳ, ಮನೋಹರ ಪಾಟೀಲ, ರೆಹಮಾನ್ ತಹಶಿಲ್ದಾರ, ಶಿವಾಜಿ ಬೆಟಗೇರಿಕರ್, ಶಿವಾಜಿ ಬೋಕಡೆ, ಮಹಾದೇವ ಪಾಟೀಲ, ಪ್ರಭಾಕರ್ ಚಿರಮುರ್ಕರ್, ನಿಂಗೂಲಿ ಚೌಹಾನ್, ವನಿತಾ ಪಾಟೀಲ, ಮಾರುತಿ ಪಾಟೀಲ, ಮದನ ಬಿಜಗಿರಕರ್, ಪರುಶರಾಮ ಯಳ್ಳೂರಕರ್, ವಿಲಾಸ ಪಾಟೀಲ, ದಾಕಳು ಪಾಟೀಲ, ಯಲ್ಲಪ್ಪ ಕಲಕಾಂಬ್ಕರ್, ಕಲ್ಲಪ್ಪ ಕನ್ನೂರಕರ್, ರವಿ ಜಾಧವ್, ರಂಜನಾ ಗಾವಡೆ, ಆಪ್ತ ಸಹಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.