ಗೋಕಾಕ : ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಯುವಕನನ್ನು ಬೀಕರವಾಗಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದೆ.ನಗರದ ಆದಿಜಾಂಬವ ನಗರದ ನಿವಾಸಿ ಶಾನೂರ ಪೂಜಾರಿ (27) ಕೊಲೆಯಾದ ಯುವಕ. ಅದೇ ಕಾಲೋನಿಯ ಐದಾರು ಜನ ಸೇರಿ ಇವನನ್ನು ಕೊಲೆಗೈದಿದ್ದು ಹಳೆ ವೈಶಮ್ಯಕ್ಕಾಗಿ ಕೃತ್ಯ ಎಸುಗಿರುವ ಅನುಮಾನ ವ್ಯಕ್ತವಾಗಿದೆ.ಹತ್ಯೆಯ ಘಟನೆಯ ನಂತರ ಮೃತನ ಸಂಬಂಧಿಕರು ಆರೋಪಿಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
tv24plus.in > Blog > ಜಿಲ್ಲೆ > ಬೆಳಗಾವಿ > ನಡು ರಸ್ತೆಯಲ್ಲೇ ಯುವಕನ ಭೀಕರ ಹತ್ಯೆ